ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಕೃಷ್ಣ ಗಾರುಡಿಯಲ್ಲ ಇದು ‘ಗಾರುಡಿ-2003’
ಬೆಂಗಳೂರು : ಇದೇ ಮೊದಲ ಬಾರಿಗೆ ನೂರಾರು ಜಾದೂಗಾರರು ಭಾಗವಹಿಸುವ ‘ಗಾರುಡಿ-2003’ ಹೆಸರಿನ ಅಖಿಲ ಕರ್ನಾಟಕ ಜಾದೂಗಾರರ ಸಮ್ಮೇಳನ ನಗರದಲ್ಲಿ ನಡೆಯಲಿದೆ.
ಜಾದೂ ಕಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾದ್ರಿ ಜಾದೂ ಸಂಘಟನೆ ಏರ್ಪಡಿಸಿರುವ ಗಾರುಡಿ-2003 ಸಮ್ಮೇಳನ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜ. 18 ಹಾಗೂ 19 ರಂದು ನಡೆಯಲಿದೆ. ಪುರಭವನದಲ್ಲಿ ನಡೆಯುವ ಈ ಸಮ್ಮೇಳನದ ನೇತೃತ್ವವನ್ನು ಪ್ರಸಿದ್ಧ ಜಾದೂಗಾರ ಪ್ರಹ್ಲಾದ ಆಚಾರ್ಯ ವಹಿಸುವರು.
ರಾಜ್ಯದ ನೂರಾರು ಹಿರಿಯ, ಕಿರಿಯ ಹಾಗೂ ಉದಯೋನ್ಮುಖ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಹಿರಿಯರ ವಿಭಾಗ ಹಾಗೂ ಕಿರಿಯರ ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಜಾದೂಗಾರರಿಗೆ ವರ್ಷದ ಗಾರುಡಿಗ ಪ್ರಶಸ್ತಿ ನೀಡಲಾಗುವುದು.
ಜಾದೂ ಸಮ್ಮೇಳನದ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9844115234.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Friday, January 17, 2003, 5:30 [IST]