ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಗಾರುಡಿಯಲ್ಲ ಇದು ‘ಗಾರುಡಿ-2003’

By Staff
|
Google Oneindia Kannada News

ಬೆಂಗಳೂರು : ಇದೇ ಮೊದಲ ಬಾರಿಗೆ ನೂರಾರು ಜಾದೂಗಾರರು ಭಾಗವಹಿಸುವ ‘ಗಾರುಡಿ-2003’ ಹೆಸರಿನ ಅಖಿಲ ಕರ್ನಾಟಕ ಜಾದೂಗಾರರ ಸಮ್ಮೇಳನ ನಗರದಲ್ಲಿ ನಡೆಯಲಿದೆ.

ಜಾದೂ ಕಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾದ್ರಿ ಜಾದೂ ಸಂಘಟನೆ ಏರ್ಪಡಿಸಿರುವ ಗಾರುಡಿ-2003 ಸಮ್ಮೇಳನ ರಾಜ್ಯ ಸರ್ಕಾರದ ಆಶ್ರಯದಲ್ಲಿ ಜ. 18 ಹಾಗೂ 19 ರಂದು ನಡೆಯಲಿದೆ. ಪುರಭವನದಲ್ಲಿ ನಡೆಯುವ ಈ ಸಮ್ಮೇಳನದ ನೇತೃತ್ವವನ್ನು ಪ್ರಸಿದ್ಧ ಜಾದೂಗಾರ ಪ್ರಹ್ಲಾದ ಆಚಾರ್ಯ ವಹಿಸುವರು.

ರಾಜ್ಯದ ನೂರಾರು ಹಿರಿಯ, ಕಿರಿಯ ಹಾಗೂ ಉದಯೋನ್ಮುಖ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಹಿರಿಯರ ವಿಭಾಗ ಹಾಗೂ ಕಿರಿಯರ ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಜಾದೂಗಾರರಿಗೆ ವರ್ಷದ ಗಾರುಡಿಗ ಪ್ರಶಸ್ತಿ ನೀಡಲಾಗುವುದು.

ಜಾದೂ ಸಮ್ಮೇಳನದ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9844115234.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X