ಸಿಂಧು ಸಿಂಧುವೆ? ನಾಡಗೀತೆಯ ನಂತರ ಇದೀಗ ರಾಷ್ಟ್ರಗೀತೆ ಸರದಿ!
ಸಿಂಧು
ಸಿಂಧುವೆ?
ನಾಡಗೀತೆಯ
ನಂತರ
ಇದೀಗ
ರಾಷ್ಟ್ರಗೀತೆ
ಸರದಿ!
ಸಿಂಧ್
ಪಾಕ್ಗೆ
ಸೇರಿದ್ದರಿಂದ
ಅದನ್ನು
ನಮ್ಮ
ದೇಶದ
ರಾಷ್ಟ್ರಗೀತೆಯಲ್ಲಿ
ಏಕೆಸೇರಿಸಿಕೊಳ್ಳಬೇಕು?
ನೊಬೆಲ್ವಿಜೇತ ಕವಿ ರವೀಂದ್ರನಾಥ್ ಟ್ಯಾಗೋರ್ ವಿರಚಿತ ಜನ ಗಣ ಮನ ರಾಷ್ಟ್ರಗೀತೆ ರಾಷ್ಟ್ರಗೀತೆಯಲ್ಲಿರುವ ಸಿಂಧ್ ಪದದ ಔಚಿತ್ಯದ ಕುರಿತು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್, ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಸಿಂಧ್ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದರಿಂದ ಅದನ್ನು ನಮ್ಮ ದೇಶದ ರಾಷ್ಟ್ರಗೀತೆಯಲ್ಲಿ ಏಕೆ ಸೇರಿಸಿಕೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ. ಸಿಂಧ್ ಪದ ಒಂದು ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆಯೇ ವಿನಾ ಪ್ರದೇಶವನ್ನಲ್ಲ ಎಂದು ಕೇಂದ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿತ್ತು.
ರಾಷ್ಟ್ರಗೀತೆ ಬರೆದ ಮತ್ತು ಅದನ್ನು ಹಿಂದಿಗೆ ಭಾಷಾಂತರ ಮಾಡಿದ ರವೀಂದ್ರನಾಥ್ ಟ್ಯಾಗೋರ್ ಅವರೇ ಸಿಂಧ್ ಎನ್ನುವ ಪದ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಅರ್ಜಿದಾರ ಸಂಜೀವ್ ಭಟ್ನಾಗರ್ ಹೇಳುತ್ತಾರೆ. ಮೂಲ ಕೃತಿ ಮತ್ತು ಅದರ ಅನುವಾದ ಮಾಡಿದವರು ಸ್ವತಃ ಲೇಖಕರೇ ಆಗಿರುವುದರಿಂದ ಅದಕ್ಕಿಂತ ಅಧಿಕೃತತೆ ಬೇಕೆ ಎನ್ನುವುದು ಇವರ ವಾದ.
ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಮಂಗಳವಾರ (ಜ.4) ರಂದು ಗೃಹ, ವಿದೇಶಾಂಗ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು