ನಕ್ಸಲೀಯರ ಬಾಂಬ್ಗೆ 6 ಮಂದಿ ಪೋಲೀಸರ ಬಲಿ
ನಕ್ಸಲೀಯರ
ಬಾಂಬ್ಗೆ
6
ಮಂದಿ
ಪೋಲೀಸರ
ಬಲಿ
ಪಾವಗಡ
ತಾಲೂಕಿನಲ್ಲಿ
ಬರ್ಬರ
ಕೃತ್ಯ:
ಪ್ರೇಮ್
ಸಾವಿಗೆ
ಪ್ರತಿಕಾರವೇ?
ತುಮಕೂರು ಜಿಲ್ಲೆಯ ವೆಂಕಮ್ಮನಹಳ್ಳಿಯಲ್ಲಿ ಪೋಲೀಸ್ ಕ್ಯಾಂಪ್ನ ಮೇಲೆ ನಡೆದ ನಕ್ಸಲರ ಬಾಂಬ್ ದಾಳಿಯಿಂದ ಪೋಲೀಸರ ಸಾವಿನೊಂದಿಗೆ, ಇತರ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಆಂಧ್ರ ಪ್ರದೇಶಕ್ಕೆ ಅಂಟಿದಂತಿರುವ ಪಾವಗಡ ತಾಲೂಕಿನ ಗಡಿ ಭಾಗದಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಟ್ಟಡವೊಂದರಲ್ಲಿ ತಂಗಿದ್ದ ಪೋಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ. ಇದು ನಕ್ಸಲರ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಕರ್ನಾಟಕ ಡಿಜಿಪಿ ಎಸ್.ಎನ್.ಬೋರ್ಕರ್ ತಿಳಿಸಿದ್ದಾರೆ.
ಸೇಡು : ಕಳೆದ ಕೆಲವು ದಿನಗಳ ಹಿಂದಷ್ಟೆ ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ರಾಜ್(ಪ್ರೇಮ್)ನನ್ನು ಎನ್ಕೌಂಟರ್ನಲ್ಲಿ ಪೋಲೀಸರು ಕೊಂದಿದ್ದರು. ಆತನ ಸಾವಿಗೆ ಪ್ರತಿಕಾರವಾಗಿ ನಕ್ಸಲರು ಇಲ್ಲಿ ಈ ಕೃತ್ಯವೆಸಗಿರಬಹುದೆಂದು ಪೋಲೀಸರು ಶಂಕಿಸಿದ್ದಾರೆ.
ಬಾಂಬ್ ಸ್ಪೋಟದಿಂದ ಕಟ್ಟಡಕ್ಕೆ ಹಾನಿಯಾಗಿದೆ. ಪಾವಗಡ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಗಾಯಗೊಂಡ ಪೋಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು